ಮಂಗಳವಾರ, ಆಗಸ್ಟ್ 9, 2016

ಮುನ್ನುಡಿ

ವಿಸ್ಮಯ!

ರ್ಷ ಆರೋಗ್ಯವಂತ. ದೈಹಿಕವಾಗಿಯಾಗಲೀ, ಮಾನಸಿಕವಾಗಿಯಾಗಲೀ ಕಿಂಚಿತ್ ಕೊರತೆಯಿಲ್ಲದಿರುವುದು ಅವನ ದಾಖಲೆ.

ಅಂಥ ಹರ್ಷ ಒಮ್ಮೆ ಪ್ರವಾಸದ ಮಧ್ಯೆ ಕುಸಿದು ಬಿದ್ದ. ಪ್ರಾಣ ಹೋಗದಿದ್ದರೂ ಪ್ರಜ್ಞೆ ಮರಳಲಿಲ್ಲ. ಜೀವಚ್ಛವವಾಗಿ ಒಂದು ಋಗ್ಣಾಲಯಕ್ಕೆ ದಾಖಲಿಸಲ್ಪಟ್ಟ. ನಿಶ್ಚೇಷ್ಟಿತನಾಗಿರುವಂತೆಯೇ ಹತ್ತು ದಿನಗಳ ಕಾಲ ಮುಂದುವರಿಯಿತು ಅವನ ಅಸ್ತಿತ್ವ. ಆ ಹತ್ತು ದಿನಗಳ ಕಾಲ ಅವನನ್ನು ಜೀವಂತವಾಗಿ ಉಳಿಸಿಕೊಳ್ಳಲು ಅನೇಕ ತಜ್ಞರು ನಡೆಸಿದ ಪರಿಶ್ರಮ ಒಂದು ವೈದ್ಯಕೀಯ ವಿಸ್ಮಯ.

ಆ ವಿಸ್ಮಯವನ್ನು ಶಬ್ದಜಾಲದಲ್ಲಿ ಹಿಡಿದಿಡುವ ಒಂದು ಸಾಧಾರಣ ಪ್ರಯತ್ನವೇ ಈ ಕಾದಂಬರಿ.

- ಬಿ. ಎಸ್. ರಂಗನಾಥ

ಮುಕ್ತ ವಿಚಾರ

ಸಾವಿನ ಹಂತ ತಲುಪಿದ್ದೆ. ಬದುಕಿಸಿಕೊಳ್ಳಲೇಬೇಕೆಂಬ ಸಂಕಲ್ಪದಿಂದ ಪತ್ನಿ ವಸಂತ, ಪುತ್ರಿ ಉಷಾ, ಅಳಿಯ ಬುದ್ದೇಶ್ ಮತ್ತು ಪುತ್ರ ರವಿ ನಿರಂತರ ಸೇವೆಗೈಯುತ್ತಿದ್ದಾರೆ. ಬದುಕಿದ್ದು, ಈ ವರ್ಷಾಂತ್ಯದೊಳಗೆ, ಈ ಕಾದಂಬರಿಯನ್ನು ಪೂರ್ಣಗೊಳಿಸುವೆನೆಂಬ ವಿಶ್ವಾಸ ಚಿಗುರೊಡೆಯುತ್ತಿದೆ.

ಕರೆಗಳು 

ದೂರವಾಣಿ ಕರೆಗಳಿಗೆ ಉತ್ತರ ನೀಡುವ ಸ್ಥಿತಿಯಲ್ಲಿ ನಾನಿಲ್ಲ. ದಯೆಯಿಟ್ಟು ಸಹಕರಿಸಿ. ಉತ್ತರ ನೀಡಬಲ್ಲವರ ಮೊಬೈಲ್ ಸಂಖ್ಯೆಗಳು ಇಂತಿವೆ:
ವಸಂತಕುಮಾರಿ:೯೦೩೫೭೧೨೬೬೬; ಉಷಾ: ೯೮೪೫೪೪೮೯೪೧; ಬುದೇಶ್: ೯೮೪೫೪೪೮೯೪೦: ರವಿ: ೯೬೬೩೭೩೧೩೫೭

ಅರ್ಪಣೆ















ಅಕ್ಕರೆಯ ಅಮ್ಮನಿಗೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ